ಶ್ರೀ ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದಲ್ಲಿ ಎಸ್. ನಾರಾಯಣ್ರ ನಿರ್ಮಾಣ-ನಿರ್ದೇಶನದ ವೀರಪರಂಪರೆ ಚಿತ್ರದ ಚಿತ್ರೀಕರಣ ನಿರಂತರವಾಗಿ ಸಾಗಿದೆ. ಗೋಕಾಕ್ ಸಮೀಪದ ತಲ್ಲೂರು ಗ್ರಾಮದಲ್ಲಿ ೧೨ ದಿನಗಳ ಶೂಟಿಂಗ್ ನಡೆಸಿ ಗುಲ್ಬರ್ಗಾದಲ್ಲಿ ಕೂಡ ಕೆಲವು ದೃಶ್ಯಗಳ ಚಿತ್ರಣದ ನಂತರ ಬೆಂಗಳೂರಿಗೆ ವಾಪಸಾಗಿತ್ತು. ಇದೀಗ ಮೈಸೂರು ಸಮೀಪದ ಕೊಳ್ಳೇಗಾಲದಲ್ಲಿ ಮಾತಿನ ಭಾಗ ಹಾಗೂ ಹಾಡೊಂದರ ಚಿತ್ರೀಕರಣವನ್ನು ಕಳೆದ ಶನಿವಾರದಿಂದ ಪ್ರಾರಂಭಿಸಿದ್ದು, ೧೫ ದಿನಗಳ ಕಾಲ ನಡೆಯಲಿದೆ. ಅಂಬರೀಶ್, ಸುದೀಪ್, ಐಂದ್ರಿತ ರೇ, ಶೋಭರಾಜ್, ಮೊದಲಾದವರು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಎಸ್. ನಾರಾಯಣ ನಿರ್ದೇಶನದ ೧೭ನೇ ಚಿತ್ರ ಇದಾಗಿದ್ದು, ಅವರೇ ಕಥೆ-ಚಿತ್ರಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಗ್ರಾಮದ ತಂದೆಯಾದ ಅಂಬರೀಶರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ ತೇಜನ ಪಾತ್ರದಲ್ಲಿ ಸುದೀಪ್ ಅತ್ಯಮೋಘ ಅಭಿನಯ ನೀಡಿದ್ದಾರೆ. ಅಂಬರೀಶ್ ಪತ್ನಿಯಾಗಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಸುದೀಪ್ ಜೋಡಿಯಾಗಿ ಐಂದ್ರಿತ ರೇ ಪ್ರಥಮಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಹಾಸ್ಯನಟನಾಗಿ ಶರಣ್, ಖಲನಾಯಕನಾಗಿ ಸುದೀಪ್ಧೋ ಅಭಿನಯಿಸಿದ್ದಾರೆ. ಆರ್. ಗಿರಿಯವ ಛಾಯಾಗ್ರಹಣ ಈ ಚಿತ್ರಕ್ಕಿದೆ.